Wednesday, July 28, 2010

ಪ್ರಥಮ ಪ್ರಯತ್ನ- ಪ್ರಥಮ ಪತ್ರ

ಓದು ಬಲ್ಲ, ಓದಬಲ್ಲ ಎಲ್ಲರಿಗೂ ನನ್ನ ವಿನಯಪೂರ್ವಕ ನಮಸ್ಕಾರಗಳು....
ನಾನು ಬರಹ ಬಲ್ಲವನೇ ಹೊರತು ಬರೆಯಬಲ್ಲವನಲ್ಲ! ಆದರೂ ತೋಚಿದ್ದನ್ನು ಗೀಚಲು, ಸಾಹಿತಿ-ಕವಿಗಳ ಗುಂಪಿಗೆ ಭಾಗಿಯಾಗಲಾಗದೇ ಬ್ಲಾಗಿಯಾಗಿದ್ದೇನೆ! ನನ್ನ ಗರಿಷ್ಠ ಪ್ರಯತ್ನವೂ ಸಹ ಕನಿಷ್ಥವಾಗಿ ಕಂಡರೂ ನಿಕೃಷ್ಟ ಮಾಡುವಂತೆ ಇರುವುದಿಲ್ಲವೆಂಬುದು ನನ್ನ ದೃಢ ವಿಶ್ವಾಸ.
ಸುಮಾರು ೧೦-೧೨ ವರ್ಷಗಳಿಂದ ಬಿಡುವೇ ಇಲ್ಲದಂತಹ ಸೋಮಾರಿ ಜೀವನಶೈಲಿ ಅನುಸರಿಸುತ್ತಿರುವ ನಾನು ಕೈಲಾದಷ್ಟು ಚುಟುಕ, ಕವನ, ಪ್ರಬಂಧ ಹಾಗೂ ಭಾಷಣಗಳನ್ನು ಕೂಡ ಬರೆದಿಟ್ಟಿದ್ದೇನೆ. ನನ್ನ ಪ್ರೌಢಶಾಲಾ ಶಿಕ್ಷಕರಾದ ಶ್ರೀಮತಿ ಶಾರದಾ ರಂಗನಾಥ್ ರವರಿಂದ ಸ್ಫೂರ್ತಿ ಪಡೆದು ಆರಂಭಿಸಿದ ಬರವಣಿಗೆ ಕೆಲಸ ನನಗೆ ಸಾಕಷ್ಟು ಖುಷಿ ಕೊಟ್ಟಿದೆ. ನನ್ನ ತಂದೆ-ತಾಯಿ ಹಾಗೂ ಸಂಪೂರ್ಣ ಕುಟುಂಬವರ್ಗದವರ ಕನ್ನಡ ಪ್ರೇಮ ಕೂಡಾ ನನ್ನ ಬರವಣಿಗೆಯ ಮೇಲೆ ಬಲವಾದ ಪ್ರಭಾವ ಬೀರಿದೆ.
ಹೂಂ....! ಹೇಳ್ಕೊಂಡಿದ್ದು ಸಾಕು ಅನ್ಸತ್ತೆ! ಇನ್ಮೇಲೆ ನಾನು ಇದುವರೆಗೂ ಬರೆದಿರುವ, ಇನ್ಮುಂದೆ ಬರೆಯುವ ಎಲ್ಲವನ್ನೂ"ತೋಚಿದ್ದು ಗೀಚಿದ್ದು" ಬ್ಲಾಗಿನ "ಮಾತುಗಾರನ ಮಾತು" ನೋಡುವವರಿಗೆ ಕಾಣುವಂತೆ ಮಾಡಲು ಪ್ರಯತ್ನಿಸುತ್ತೇನೆ.


-ಅನಿರುದ್ಧ

3 comments:

  1. thumbaa santosha....swalpa swalpavaagi kaLisu. ajIrNavaaDare kashta.

    ReplyDelete
  2. hey ani super kano...kannada medium al odhidakke sarthaka aytu..naananthu enu maadlilla...atleast u r upto smthing...cheers to u dear...i admire


    Raksha

    ReplyDelete