Friday, September 10, 2010

ಗಣಪತಿಗೊಂದು ಮನವಿ

ನೆಟ್ಟಗೆ ನೆಟ್ ನಿಂದ ಕದ್ದ ಚಿತ್ರ
ಗಣಪತಿಗೊಂದು ಮನವಿ 



ನಿನ್ನ ಹುಟ್ಟಿದ ದಿನಕ್ಕೆ ನಿನಗೊಂದು ಮನವಿ, ಗೌರಿ-ಈಶ ಪುತ್ರ
ವಿಘ್ನ ನಿವಾರಣೆಗೆ ನಿನ್ನ ಅಮಿತ ನಾಮ ಸ್ಮರಣೆಯೇ ಸೂತ್ರ-ಸ್ತೋತ್ರ
ಶುಭಾರಂಭಕ್ಕೆ ಜನಮನ ಬೇಡುವುದು ಗಣಜನಕ, ಬೆನಕ ನಿನ್ನ ಮಾತ್ರ 
ಉದ್ದಂಡ, ಓಂಕಾರ, ಲೆಕ್ಕಾಚಾರ ಮಾಡದೇ ನಂಬಿದವರ ಕುಲ-ಗೋತ್ರ
ದೇವದೇವ, ಧೂಮ್ರವರ್ಣ, ಲಂಬಕರ್ಣ, ಗಜಗಾತ್ರ, ಬಾರೋ ಭಕ್ತಮಿತ್ರ
ಜಾಗತಿಕ ದರಿದ್ರವ ದೂರ ಮಾಡೋ ಹರಿದ್ರ, ಬಂದು ಭೂಮಿಗೆ ಹತ್ರ!! 

ಈ ಗೌರಿ-ಗಣೇಶ ಹಬ್ಬವು ತಮಗೂ-ತಮ್ಮ ಕುಟುಂಬಕ್ಕೂ ಆರೋಗ್ಯ, ಐಶ್ವರ್ಯ, ಆಯಸ್ಸು, ಸಂತೋಷ ಹಾಗೂ ತೃಪ್ತಿ ತರಲೆಂದು ಆಶಿಸುವ

ಅನಿರುದ್ಧ 

Wednesday, September 1, 2010

ರಾಷ್ಟ್ರಪತಿ

2002
ರಾಷ್ಟ್ರಪತಿ 
(ನಾನು ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಹೋದ ಸಂದರ್ಭ)

ಅಬ್ದುಲ್ ಕಲಾಂ ಈಗ ಪ್ರೆಸಿಡೆಂಟು
ಅವರಿಗಿಲ್ಲ ಸಂಸಾರದ ನಂಟು
ಮಾಡಲಾರರು ಗಂಟು
ಅವರಿಗೂ ಭಾರತಕ್ಕೂ ಸೆಂಟಿಮೆಂಟು.

-ಅನಿರುದ್ಧ

ನನ್ನ ಮೊಟ್ಟ ಮೊದಲ ಪ್ರಯತ್ನ!

1995
ಶಿವಮೊಗ್ಗ





ನನ್ನ ಮೊಟ್ಟ ಮೊದಲ ಪ್ರಯತ್ನ!


ನನ್ನ ಆಟ 

ನನ್ನ ಆಟ 
ಎಂಥ ಚೆನ್ನ
ನಿಮಗೆ ಗೊತ್ತಿಲ್ಲ

ನೀವು ಬಂದ್ರೆ
ಹೇಳಿಕೊಡುವೆ
ಯಾರು ಬರ್ತೀರಾ?

ಆಯ್ತು ಕಣೋ
ನಾವು ಬರ್ತೀವಿ
ನಡೆ ಹೋಗೋಣ 

ಎಂಥ ಆಟ 
ಹೇಳಿಕೊಡುವೆ,
ಅದು ಯಾವುದು?

ಓಡುವಾಟ,
ಹಿಡಿಯುವಾಟ,
ಅವಿತುಕೊಳುವಾಟ.

-ಅನಿರುದ್ಧ